«

»

Print this Post

`ಧರ್ಮ’ದ ನೆಲೆಗಟ್ಟಲ್ಲಿ `ಆಶ್ವಮೇಧ’ ನಿತ್ಯವೂ ನಡೆಯಬೇಕು!

ಅಶ್ವ ಮೇಧ

“ಧರ್ಮ”ದ ನೆಲೆಗಟ್ಟಲ್ಲಿ “ಅಶ್ವ ಮೇಧ” ನಿತ್ಯವೂ ನಡೆಯಬೇಕು!

ಹಾಸನ ಸಮೀಪದ ದೊಡ್ಡಪುರ ಶ್ರೀ ಸಮಥ್ರ ರಾಮಾಶ್ರಮದ ಸಾಕೇತಪುರದಲ್ಲಿ 2012 ಫೆ. 29 ರಿಂದ ಮಾ. 6ರವರೆಗೆ `ಸಾಂಕೇತಿಕ ಅಶ್ವ ಮೇಧ ಯಾಗ’ವೊಂದು ಕೋಟ್ಯಾಂತರ ರೂ. ವೆಚ್ಚದಲ್ಲಿ ನಡೆಯುತ್ತಿದೆ; ಇದರ ಔಚಿತ್ಯದ ಕುರಿತು ಸಾಕಷ್ಟು ಚಚ್ರೆಗಳಾಗುತ್ತಿವೆ. ಇದೆಲ್ಲಕ್ಕಿಂತ ವೊದಲು `ಧಮ್ರ’ ಮತ್ತು `ಅಶ್ವ ಮೇಧ’ದ ನಿಜವಾದ ಅಥ್ರ ತಿಳಿಯಬೇಕು; ಈ ನಿಜವಾದ ಅಥ್ರಕ್ಕೆ ಅನುಸಾರವಾಗಿ ಅದು ಅನುಷ್ಠಾನವಾಗುತ್ತಿದೆಯೋ ಅಥವಾ ಬರೀ “ಅಥ್ರ”(ಹಣ) ವನ್ನು ಅನುಸರಿಸಿದ ಅನಥ್ರವೋ ಎಂಬುದರ ಮೇಲೆ ಇದರ ಔಚಿತ್ಯ ಅನೌಚಿತ್ಯಗಳ ನಿಧ್ರಾರಕ್ಕೆ ಬರಬಹುದು!

ಅಶ್ವ ಮೇಧದ ನಿಜವಾದ ಅಥ್ರ ತಿಳಿದುಕೊಳ್ಳುವ ಮುನ್ನ, ಪ್ರಸ್ತುತ ಭಾರತೀಯ ಪರಂಪರೆಯಲ್ಲಿ ವೇದೋಪನಿಷತ್ತುಗಳ ಹೆಸರಿನಲ್ಲಿ ಸಾಗಿ ಬಂದಿರುವ ತಪ್ಪು ಕಲ್ಪನೆಗಳು, ಪ್ರಕ್ಷಿಪ್ತಗಳು, ವೈಪರೀತ್ಯಗಳು, ಅಜಾÕನ ಹಾಗೂ ಅವಿವೇಕದ ಆಚರಣೆಗಳ ಕುರಿತು ಸಂಕ್ಷಿಪ್ತವಾಗಿಯಾದರೂ ತಿಳಿದುಕೊಳ್ಳುವುದು ಅನಿವಾಯ್ರ. ಕಳಂಕಗಳನ್ನಷ್ಟೇ ಹಿಡಿದು ಜಗ್ಗಾಡುತ್ತಾ ಮೂಲ ಸಿದ್ಧಾಂತ ಹಾಗೂ ಸತ್ಯಗಳನ್ನು ಮರೆತರೆ ಚಚ್ರೆ ಹಾದಿ ತಪ್ಪುತ್ತದೆ; ವಿತಂಡ ವಾದವೂ ಆಗುತ್ತದೆ.

ಮೂಲ ವೇದಗಳಲ್ಲಿನ ಮಂತ್ರಗಳನ್ನೇ ಉಲ್ಲೇಖಿಸುತ್ತಾ ವೇದಾಧ್ಯಾಯಿ ಶ್ರೀ ಸುಧಾಕರ ಶಮ್ರ ಅವರು ನೀಡಿರುವ ವಿದ್ವತ್ಪೂಣ್ರ ಉಪನ್ಯಾಸಗಳ ಆಧಾರ ಮೇಲೆ ಈ ಸತ್ಯ ಸಂಗತಿಗಳನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ:

1) `ವೇದ’ ಎಂದರೆ `ಜಾÕನ’. ಜಗತ್ತಿನಲ್ಲಿ ಮನುಷ್ಯ ಹೇಗೆ ಬದುಕಬೇಕೆಂಬುದಕ್ಕೆ ಮಾಗ್ರ ಸೂಚಿಯಾಗಿ ಸಾವ್ರಕಾಲಿಕ ನಿತ್ಯ ಸತ್ಯಗಳನ್ನು ಮಾತ್ರ ಈ ಚತುವ್ರೇದಗಳು ಪ್ರಸ್ತುತಪಡಿಸುತ್ತವೆ. `ಮನುಕುಲದ ಸಂವಿಧಾನ’ ಎನಿಸಿದ ಈ ವೇದಗಳು ಸತ್ಯ-ಅಹಿಂಸೆ ಸಿದ್ಧಾಂತದ ತಳಹದಿ ಹೊಂದಿವೆ. ಆರು ವೇದಾಂಗಗಳ ಸಹಿತ ಅತ್ಯಂತ ಸುಭದ್ರವಾದ ದಿಗ್ಬಂಧನ ಹೊಂದಿರುವುದರಿಂದ ವೇದಗಳನ್ನು ತಿರುಚಲು, ಪ್ರಕ್ಷಿಪ್ತಗೊಳಿಸಲು, ಅವುಗಳಲ್ಲಿ “ಕೈಯ್ಯಾಡಿಸಲು” ಈವರೆಗೂ ಸಾಧ್ಯವಾಗಿಲ್ಲ; ಆದ್ದರಿಂದಲೇ `ವೇದ ವಾಕ್ಯ’ ಎಂಬ ನಾಣ್ಣುಡಿ ಹುಟ್ಟಿಕೊಂಡಿರುವುದು! ಶತ-ಶತಮಾನಗಳಷ್ಟು ಹಿಂದಿನ ರಚನೆಗಳಾಗಿರುವುದರಿಂದ ಇವುಗಳ ಕಾಲಮಾನ ಇನ್ನೂ ಖಚಿತಪಟ್ಟಿಲ್ಲ. ಇದರಿಂದಾಗಿ ಅನಾದಿ; ಸನಾತನ ಎನಿಸಿಕೊಂಡಿವೆ!

2) ಉಳಿದ ಎಲ್ಲ ರೀತಿಯ ಪುರಾಣಗಳು, ಸ್ಮøತಿಗಳು, ಶಾಸ್ತ್ರಗಳು, ಆಗಮಗಳು, ಮಿತಿ ಮೀರಿದ ದೇವರುಗಳು, ದೇವತಾಚ್ರನೆ, ಅಪರ ಕಮ್ರ (ಶ್ರಾದ್ಧ), ಜ್ಯೋತಿಷ್ಯ, ವಾಸ್ತು, ಧಾಮ್ರಿಕ ಆಚರಣೆ, ಪ್ರಾಣಿ ಬಲಿ, ಅಹಿಂಸೆ, ವಾಮಾಚಾರ (ಮಾಟ) ಇತ್ಯಾದಿಗಳೆಲ್ಲವೂ ವೇದೋಪನಿಷತ್ತುಗಳ ನಂತರ ಹುಟ್ಟಿಕೊಂಡವುಗಳಾಗಿವೆ. ಕಾಲ ಪ್ರವಾಹಕ್ಕೆ ಸಿಕ್ಕಿ ಆಯಾ ಕಾಲಕ್ಕೆ ಅನುಗುಣವಾಗಿ ಪರಿವತ್ರನೆಗೊಳ್ಳುತ್ತಾ, ಈಗ ವೇದೋಪನಿಷತ್ತುಗಳ ಹೆಸರಲ್ಲಿ ಪ್ರಚಲಿತವಿರುವ ಇವೆಲ್ಲವೂ ಬಹುತೇಕ ವೇದ ವಿರುದ್ಧ, ಪ್ರಕ್ಷಿಪ್ತ ಹಾಗೂ ಅವೈಜಾÕನಿಕ!

3) ಕಾಲ ಪ್ರವಾಹದಲ್ಲಿ ಆಯಾ ಸಂದಭ್ರ, ಅಜಾÕನ, ಅವಿವೇಕದ ಫಲವಾಗಿ ಮೂಲ ಸಿದ್ಧಾಂತವನ್ನೇ ಕಡೆಗಣಿಸುತ್ತಾ, ವೇದಗಳ ಕುರಿತು ಪಾಶ್ಚಾತ್ಯ ವಿದ್ವಾಂಸರು ಮಾಡಿದ ತಕ್ರ, ಕುತಕ್ರ, ಊಹಾಪೋಹಗಳಿಗೆ ಮಾನ್ಯತೆ ನೀಡುತ್ತಾ ಬಂದ ಕಾರಣ ವೇದ ಮಂತ್ರಗಳಿಗೆ `ಅಪಾಥ್ರ’ಗಳು ಆರೋಪಿಸಲ್ಪಟ್ಟವು. ಶತಮಾನಗಳಿಂದಲೂ ಹೀಗೆ ತಿರುಚಲ್ಪಟ್ಟ ತಪ್ಪು ಕಲ್ಪನೆಗಳು ವ್ಯಾಪಕವಾಗಿ ಹರಡಿದ ಪರಿಣಾಮವಾಗಿಯೇ ಇಂದಿನ ಚಾತುವ್ರಣ್ರ, ಅಸ್ಪøಶ್ಯತೆ, ಜಾತೀಯತೆ, ಇತ್ಯಾದಿ ಮಾನವ ವಿರೋಧಿ ಪಿಡುಗುಗಳು ಆವರಿಸಿವೆ.

4) ಈಗಿನ ದೇವತಾಚ್ರನೆ, ವ್ರತಗಳು, ಪೂಜೆ, ಪುನಸ್ಕಾರ ಹಾಗೂ ಅಲ್ಲೆಲ್ಲಾ ಹೇಳುವ ಮಂತ್ರಗಳು ಯಾವುವೂ ಸಹ ವೇದ ಮಂತ್ರಗಳಲ್ಲ! ಅವೆಲ್ಲ ಆಗಮ ಶಾಸ್ತ್ರಗಳಲ್ಲಿನ (ವೈಖಾನಸ ಇತ್ಯಾದಿ) ಮಂತ್ರಗಳಾಗಿವೆ; ಆದರೂ ಅಲ್ಲಲ್ಲಿ, ನಡು ನಡುವೆ ಮೂಲ ವೇದ ಮಂತ್ರಗಳು ಸಹ ಇಣುಕುತ್ತವೆ (ಆಪೋಹಿಷ್ಠಾ ಮಯೋಭುವಸ್ಥಾನ…..ಇತ್ಯಾದಿ)! ವೇದ ತನ್ನದೇ ಆದ `ವೇದ ಭಾಷೆ’ಯಲ್ಲಿದೆಯೇ ಹೊರತು, ಸಂಸ್ಕøತದಲ್ಲಿಲ್ಲ! ವೇದ ಭಾಷೆಯ ಪ್ರಭಾವದಿಂದಲೇ ಸಂಸ್ಕøತ ನಂತರ ಹುಟ್ಟಿಕೊಂಡಿತು. ಇನ್ನು,. ವೇದಗಳಲ್ಲಿನ ಯಜÕ ಯಾಗಾದಿಗಳ ಆಚರಣೆ ವಿಧಾನಗಳಂತೂ ಬಹುತೇಕ ತಿರುಚಲ್ಪಟ್ಟಿರುವುದರಿಂದ ಅಪ್ರಸ್ತುತವಾಗಿವೆ.

5) ಶತಮಾನಗಳಷ್ಟು ಕಾಲ ಗಣನೆ ನಡುವೆ ಇಷ್ಟೆಲ್ಲಾ ಅನಾಹುತಗಳು ಯಾವಾಗ ಸಂಭವಿಸಿದವು? ಯಾರು ಮಾಡಿದ್ದು? ಏಕೆ ಮಾಡಿದ್ದು? ಹೇಗಾಯಿತು? ಎಂಬಿತ್ಯಾದಿ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುವುದು ಅಷ್ಟು ಸುಲಭವಿಲ್ಲ! ಏಕೆಂದರೆ ಇತಿಹಾಸಕ್ಕೂ ಇತಿಮಿತಿಗಳಿವೆ. ವೊಗಲರಿಗೂ ಹಿಂದೆ ಆಗಿರಬಹುದಾದ ಪರಕೀಯರ ದಾಳಿಗಳು, ಅದಕ್ಕೂ ಹಿಂದಿನ ಭಾರತದ ಭೌಗೋಳಿಕ ಹಾಗೂ ಸಾಮಾಜಿಕ ಪರಿಸ್ಥಿತಿ, ಪರಕೀಯರ ದಾಳಿಗಳ ನಂತರದ ಸಾಮಾಜಿಕ ಪರಿಸ್ಥಿತಿ ಇತ್ಯಾದಿಗಳನ್ನೆಲ್ಲ ಒಮ್ಮೆ ತಲೆಗೆ ತಂದುಕೊಂಡು ಈ ಜಿಜಾÕಸೆಗೆ ಉತ್ತರ ಹುಡುಕುತ್ತಾ ಹೋದರೂ ಸಹ, `ಕಣ್ಣು ಕಟ್ಟಿಕೊಂಡು ಕತ್ತಲಲ್ಲಿ ಕರಿ ಬೆಕ್ಕು’ ಹುಡುಕಿದಂತೆಯೇ’ ಸರಿ! ಮೇಲ್ಕಂಡ ಎಲ್ಲ ವಿಷಯಗಳ ಬಗ್ಗೆ ಪ್ರತ್ಯೇಕವಾಗಿ ವಿಷಯವಾರು ಲೇಖನಗಳ ರಾಶಿಯನ್ನೇ ಸೃಷ್ಟಿಸಬಹುದು; ನಾನಿಲ್ಲಿ ಎಲ್ಲವನ್ನೂ ಸಂಕ್ಷಿಪ್ತವಾಗಿ ಉಲ್ಲೇಖಿಸುತ್ತಿದ್ದೇನೆ ಅಷ್ಟೆ.

ಈ ಎಲ್ಲ ಹಿನ್ನೆಲೆಯಲ್ಲಿ ಮೇಲ್ಕಂಡ ಕಸವನ್ನೆಲ್ಲ ತಿಪ್ಪೆಗೆ ಎಸೆದು, ಮೂಲ ವೇದಗಳಲ್ಲಿ `ಅಶ್ವ ಮೇಧ’ ಹಾಗೂ `ಧಮ್ರ’ಗಳಿಗೆ ಇರುವ ನಿಜವಾದ ಅಥ್ರಗಳತ್ತ ಗಮನ ಹರಿಸೋಣ:

`ಅಶ್’ ಎಂಬ ಮೂಲ ಧಾತುವಿನಿಂದ ಅಶ್ವ ಪದ ನಿಷ್ಪತ್ತಿಯಾಗಿದೆ. ವೇದಾಂಗವಾದ `ನಿರುಕ್ತ’ (ವೇದಗಳಿಗೇ ಮೀಸಲಾದ ನಿಘಂಟು) ದಲ್ಲಿ ಯಾಸ್ಕರು ಇದಕ್ಕೆ 2 ಅಥ್ರಗಳನ್ನು ನೀಡಿದ್ದಾರೆ. ಆಧ್ಯಾತ್ಮಿಕವಾಗಿ ಹೇಳಬೇಕೆಂದರೆ, ಯಾವುದು ಮುಂದು ಮುಂದಕ್ಕೆ ನಡೆಸುತ್ತದೆಯೋ ಅದಕ್ಕೆ ಅಶ್ವ ಎನ್ನುತ್ತಾರೆ. ಆ ಅಥ್ರದಲ್ಲಿ ನಮ್ಮನ್ನು ಯಾವುದು ಮುಂದು ಮುಂದೆ ಕರೆದೊಯ್ಯತ್ತವೆಯೋ ಅವೆಲ್ಲವೂ `ಅಶ್ವ’ವೇ ಆಗುತ್ತದೆ; ಆದರೆ ಭಾಷಾ ಪ್ರಯೋಗದಲ್ಲಿ ಮಾತ್ರ ಸಂಸ್ಕøತ ನಿಘಂಟುವಿನಲ್ಲಿ ಇದಕ್ಕೆ `ಕುದುರೆ’ ಎಂಬ ಸಾಮಾನ್ಯ ಅಥ್ರ ಕಲ್ಪಿಸಲಾಗಿದೆ. ವೇದಗಳ ಮೂಲ ಸಿದ್ಧಾಂತದ ಆಧಾರದ ಮೇಲೆ ನೋಡಿದಾಗ ಮಾನವ ಜೀವಿಯನ್ನು ಮುಂದು ಮುಂದಕ್ಕೆ ಕರೆದೊಯ್ಯುವ ಪಂಚೇಂದ್ರಿಯಗಳಿಗೆ ಅಶ್ವ ಎನ್ನುತ್ತೇವೆ! ಅದೇ ರೀತಿ ಯಾವುದಕ್ಕೆ `ನಾಳೆ’ಗಳಿಲ್ಲವೋ ಅದಕ್ಕೆ `ಅಶ್ವ’ ಎನ್ನುತ್ತೇವೆ. ನಾಳೆಗಳಿಲ್ಲ ಎಂದ ಮೇಲೆ ಅದಕ್ಕೆ `ನಿನ್ನೆ’ಗಳೂ ಇಲ್ಲ; ಅಂದರೆ ಯಾವುದು ನಿರಂತರವೋ; ಶಾಶ್ವತವೋ ಅದಕ್ಕೆ ಅಶ್ವ ಎನ್ನುತ್ತೇವೆ. ಈ ಶರೀರ ಇಂದು ಇರುತ್ತದೆ; ನಾಳೆ ಹೋಗುತ್ತದೆ; ಆದರೆ ಎಷ್ಟೇ ಶರೀರಗಳನ್ನು ಪಡೆದರೂ ಅದರೊಳಗಿನ `ಆತ್ಮ’ ಮಾತ್ರ ಶಾಶ್ವತ; ಹೀಗಾಗಿ ಆತ್ಮಕೆ ಅಶ್ವ ಎನ್ನಲಾಗುತ್ತದೆ!

ಅದೇ ರೀತಿ, ರಾಷ್ಟ್ರಕ್ಕೂ `ಅಶ್ವ’ ಎನ್ನಲಾಗುತ್ತದೆ. ರಾಷ್ಟ್ರದಲ್ಲಿ ಪ್ರಜೆಗಳು ಹುಟ್ಟುತ್ತಲೇ ಇರುತ್ತಾರೆ; ಸಾಯುತ್ತಲೇ ಇರುತ್ತಾರೆ; ಇಂದು ಇದ್ದು ನಾಳೆ ಹೋಗುತ್ತಾರೆ; ಆದರೆ ರಾಷ್ಟ್ರ ಮಾತ್ರ ಇದ್ದೇ ಇರುತ್ತದೆ. ಹೀಗಾಗಿ, ನಿರುಕ್ತದಲ್ಲಿ `ಅಶ್ವಂ ಇತಿ ರಾಷ್ಟ್ರಃ’ ಎಂದು ತಿಳಿಸಲಾಗಿದೆ! `ಮೇಧ’ ಶಬ್ದಕ್ಕೆ `ಒಟ್ಟುಗೂಡಿಸು’ ಎಂಬ ಅಥ್ರವಿದೆ. ಆದರೆ ಯಾವುದೋ ಕಾಲದಲ್ಲಿ; ಯಾವುದೋ ಸಂದಭ್ರದಲ್ಲಿ ಸಂಸ್ಕøತ ನಿಘಂಟು ಆಧರಿಸಿ, ಅಶ್ವ ಎಂದರೆ ಕುದುರೆ; ಮೇಧ ಎಂದರೆ ಕತ್ತರಿಸು- ಅಂದರೆ `ಕುದುರೆ ತಂದು ಕತ್ತರಿಸು’ವುದನ್ನು ಅಶ್ವಮೇಧ ಎಂಬುದಾಗಿ ಸವ್ರೇ ಸಾಮಾನ್ಯ ಅಥ್ರ ಕಲ್ಪಿಸಲಾಯಿತು. ಈ ಅಥ್ರವನ್ನು ಬಲವಾಗಿ ಅಪ್ಪಿಕೊಂಡೇ ರಾಜ ಮಹಾರಾಜರು ತಮ್ಮ ಸ್ವಾಥ್ರ ಬುದ್ಧಿಯ ಸಾಮ್ರಾಜ್ಯ ವಿಸ್ತರಣೆ ಮಹತ್ವಾಕಾಂಕ್ಷೆಗಾಗಿ ಅಶ್ವ ಮೇಧ ಯಾಗವನ್ನು ಅದರ ಸಾಮಾನ್ಯ ಶಬ್ದಾಥ್ರದಂತೆಯೇ ಅನುಷ್ಠಾನಗೊಳಿಸುತ್ತಾ ಬಂದರು; ಅದೇ ನಿಜವೆಂದು ನಾವೂ ನಂಬಿದೆವು! ವೇದ ಶಬ್ದವೊಂದಕ್ಕೆ ಅಪಾಥ್ರ ಕಲ್ಪಿಸಿದರೆ ಏನೇನು ಅನಾಹುತಗಳಾಗುತ್ತವೆ ಎಂಬುದಕ್ಕೆ ಇದೊಂದು ನಿದಶ್ರನ ಸಾಕು; ಇಂಥವು ಬೇಕಾದಷ್ಟಿವೆ. ಅವೆಲ್ಲದರ ದುಷ್ಪರಿಣಾಮವನ್ನು ಶತಮಾನಗಳ ನಂತರವೂ ನಾವು ಅನುಭವಿಸುತ್ತಿದ್ದೇವೆ!

ವೇದಗಳ ಮೂಲ ಸಿದ್ಧಾಂತ ಅಹಿಂಸೆ ಎಂಬ ಹಿನ್ನೆಲೆಯಲ್ಲೂ ಪರಾಮಶ್ರಿಸಿ: ಉದಾ: `ಯಜÕ’ ಶಬ್ದಕ್ಕೆ ಇನ್ನೊಂದು ಪರ್ಯಾಯ ಪದ `ಅಧ್ವರ’. (ಧ್ವರ ಎಂದರೆ ಹಿಂಸೆ); ಅಧ್ವರ ಎಂದರೆ ಅಹಿಂಸೆ; ಹಾಗಿದ್ದ ಮೇಲೆ ಯಜÕ ಯಾಗಾದಿಗಳಲ್ಲಿ ಪ್ರಾಣಿ ಬಲಿಯ ಮಾತೆಲ್ಲಿ ಬಂತು!? ಮೇಲ್ಕಂಡ ನಿಜಾಥ್ರಗಳನ್ನು ಹಿಡಿದು ಈಗ ಒಮ್ಮೆ ಯೋಚಿಸಿ! ನಮ್ಮನ್ನು ಅಡ್ಡ ದಾರಿಯಲ್ಲಿ ಮುನ್ನಡೆಸುವ ಪಂಚೇಂದ್ರಿಯಗಳನ್ನು ಒಟ್ಟಿಗೇ ಕಟ್ಟಿಟ್ಟು ನಿಯಂತ್ರಣದಲ್ಲಿಡುವ ಆತ್ಮ ಯಜÕವೇ ಅಶ್ವಮೇಧ! ಅದೇ ರೀತಿ ರಾಷ್ಟ್ರವನ್ನು ಒಗ್ಗೂಡಿಸಲು ಮಾಡುವ ಯಾವುದೇ ಕಾಯ್ರವೂ ಅಶ್ವಮೇಧವೇ!! ಈ ರೀತಿಯಾಗಿ `ಅಶ್ವ ಮೇಧ’ಕ್ಕೆ ಒಂದು ಘನ, ಗಂಭೀರ ಹಾಗೂ ಉದಾತ್ತ ಅಥ್ರವಿದೆ. ಈ ರೀತಿಯಾಗಿ ಜಗತ್ತಿನ ಸವ್ರರೂ ನಿತ್ಯವೂ ಅಶ್ವಮೇಧ ಮಾಡಿದರೆ!? ಒಮ್ಮೆ ಕಲ್ಪಿಸಿಕೊಳ್ಳಿ; ಅದೊಂದು `ಸುವಣ್ರ ಯುಗ’ವೇ ಆದೀತು!

ಈಗ ಔಚಿತ್ಯ ಹಾಗು ಅನೌಚಿತ್ಯದ ಪ್ರಶ್ನೆಗೆ ಬರೋಣ: ಯಜÕ ಯಾಗಾದಿಗಳಿಂದ ಪರಿಸರ ಮಾಲಿನ್ಯ ದೂರವಾಗಿ ಗಾಳಿ ಶುದ್ಧವಾಗುತ್ತದೆ ಎಂಬ ವಾದವಿದೆ. ನಿಜ! ಇದು ವೈಜಾÕನಿಕವಾಗಿ ಸಾಬೀತಾಗಿರುವ ಸತ್ಯ. ಆದರೆ ಯಜÕ ಕುಂಡದಲ್ಲಿನ ಅಗ್ನಿಗೆ ನೀವು ಏನೇನನ್ನು ಅಪ್ರಿಸುತ್ತಿದ್ದೀರಿ ಎಂಬುದರ ಮೇಲೆ ಈ ಸತ್ಯಾಸತ್ಯಗಳು ನಿಂತಿವೆ. ದಿನವೂ ಮನೆಗಳಲ್ಲಿ ಮಾಡುವ ಸಾಮಾನ್ಯ ಅಗ್ನಿ ಹೋತ್ರದಲ್ಲೂ ಸಹ ನಿದ್ರಿಷ್ಟ ಸಮಿತ್ತು, ನಿದ್ರಿಷ್ಟ ಮರದ ಕಡ್ಡಿಗಳನ್ನು ಸುಡಬೇಕು ಎಂಬ ಪಟ್ಟಿಯೇ ಇದೆ. ಆ ಪಟ್ಟಿ ಪ್ರಕಾರ ಆಯಾ ವನಸ್ಪತಿ, ಮರದ ಕಡ್ಡಿಗಳು, ಸಮಿತ್ತುಗಳು ಹಾಗೂ ಔಷಧೀಯ ಬೇರುಗಳನ್ನು ಹಾಕಿದಾಗ ಮಾತ್ರ ಅದರಿಂದ ಏಳುವ ಹೊಗೆ ವಾತಾವರಣವನ್ನು ಶುದ್ಧಮಾಡಿ ಸತ್ಪರಿಣಾಮ ಉಂಟು ಮಾಡುತ್ತದೆ.

ಆದರೆ ಈಗ ನಡೆಯುತ್ತಿರುವುದೇನು? ಢಾಂಬಿಕತನ ಪ್ರದಶ್ರನಕ್ಕಾಗಿ ಅಗ್ನಿಗೆ ಸೀರೆ, ರವಿಕೆ, ರೇಷ್ಮೆ ಬಟ್ಟೆ, ದುಡ್ಡು ಇತ್ಯಾದಿ `ಅಯೋಗ್ಯ’ ವಸ್ತುಗಳನ್ನು ಹಾಕುತ್ತಾರೆ. ಅವೆಲ್ಲ ಸುಟ್ಟು ಭಸ್ಮವಾಗಿ ಇತ್ತ ಆಥ್ರಿಕವಾಗಿಯೂ ನಷ್ಟ; ಅತ್ತ ವಾತಾವರಣಕ್ಕೂ ಕಷ್ಟ! ಇದರಲ್ಲಿ ಲೋಕ ಕಲ್ಯಾಣದ ಮಾತೆಲ್ಲಿ ಬಂತು? ವೇದಗಳಲ್ಲಿ ಹೇಳಿರುವ ನಿಗದಿತ ಸಮಿತ್ತು, ಔಷಧಿಯ ಬೇರುಗಳ ಪಟ್ಟಿಯ ಅನುಸಾರ ಯಜÕ ಮಾಡಿದರೆ ಮಾತ್ರ ಅದರ ಫಲ ಲೋಕಕ್ಕೆ ಸಿಕ್ಕೇ ಸಿಗುತ್ತದೆ. ಒಟ್ಟಾರೆ ಸರಳವಾಗಿ ಹೇಳುವುದಾದರೆ, `ಮಾಡಬೇಕಾದ್ದನ್ನು ಮಾಡಿದರೆ ಆಗಬೇಕಾದ್ದು ಆಗಿಯೇ ಆಗುತ್ತದೆ’; ಅದೇ ರೀತಿ `ಮಾಡಬಾರದ್ದು ಮಾಡಿದರೆ; ಆಗಬಾರದ್ದು ಆಗಿಯೇ ತೀರುತ್ತದೆ’.

ಕೋಟ್ಯಾಂತರ ರೂ. ವೆಚ್ಚದ ಕೇಂದ್ರೀಕೃತ ಯಜÕ ಯಾಗಾದಿಗಳ `ಅನುಮಾನಾಸ್ಪದ ಆಥ್ರಿಕ ಹೊರೆ’ ಅನೌಚಿತ್ಯ. ಅದರ ಬದಲಾಗಿ ಪ್ರತಿ ಮನೆಗಳಲ್ಲೂ ಪ್ರತಿ ದಿನ ಬೆಳಗ್ಗೆ-ಸಂಜೆ 2 ಹೊತ್ತು ಸರಳವಾಗಿ ಎಲ್ಲರೂ “ವೇದೋಕ್ತ ಅಗ್ನಿ ಹೋತ್ರ” ಮಾಡುವುದೇ ಔಚಿತ್ಯ. ಇದರಿಂದ ಖಂಡಿತವಾಗಿ ನಮ್ಮ ಸುತ್ತಲಿನ ಪರಿಸರ ಹಾಗೂ ಗಾಳಿ ಶುದ್ಧವಾಗುತ್ತದೆ. ನಾವು ಹೇಳುವ ಮಂತ್ರಗಳಿಂದ ನಮ್ಮ ಮನೋ ಮಾಲಿನ್ಯವೂ ದೂರವಾಗಿ ನೆಮ್ಮದಿ ನೆಲೆಸುತ್ತದೆ; ಇವೆರಡರ ಮೂಲಕ ಲೋಕ ಕಲ್ಯಾಣವೂ ಆಗುತ್ತದೆ. ಉಳಿದ ಎಲ್ಲವೂ ಶುದ್ಧಂ ಪಿಟಿಪಿಟಿ ಅಷ್ಟೆ!

ಇನ್ನು, `ಧಮ್ರ’ದ ಬಗ್ಗೆ ತಿಳಿಯೋಣ:

ಕುರುಕ್ಷೇತ್ರ ಯುದ್ಧಾನಂತರ, ಶರ ಶಯ್ಯೆಯಲ್ಲಿ ಮಲಗಿದ್ದ ಭೀಷ್ಮರ (ಅವರು ಶರ ಶಯ್ಯೆಯಲ್ಲಿ ಮಲಗಿದ್ದರೋ ಇಲ್ಲವೋ ಅದು ಇಲ್ಲಿ ಅಪ್ರಸ್ತುತ) ಬಳಿಗೆ ಬಂದ ಧಮ್ರರಾಜನಿಗೆ ಅವರು ಧವ್ರೋಪದೇಶ ಮಾಡುತ್ತಾರೆ. ಆಗ ಅವರು ಹೇಳಿದ ವೇದ ಮಂತ್ರದ ಉತ್ತರಾಧ್ರ ಹೀಗಿದೆ:

`……..ಆತ್ಮನಃ ಪ್ರತಿಕೂಲಾನಿ; ಪರೇಷಾಂ ನ ಸಮಾಚರೇತ್!’

ಅಂದರೆ, `ನಿನ್ನ ಆತ್ಮಕ್ಕೆ ಯಾವುದು ಪ್ರತೀಕೂಲವೋ ಅದನ್ನು ಪರರಿಗೆ ಅನ್ವಯಿಸಲು ಹೋಗಬೇಡ!’ ಇಷ್ಟೇ ಇದರ ಅಥ್ರ. ಉದಾಹರಣೆಗೆ: ಒಬ್ಬ ವ್ಯಕ್ತಿ ನಿಮ್ಮ ಕತ್ತನ್ನು ಕತ್ತರಿಸಲು ಬಂದಾಗ ಅದಕ್ಕೆ ನೀವು ಪ್ರತಿರೋಧ ಒಡ್ಡುತ್ತೀರಿ; ಅಂದರೆ ಆತ್ಮನಃ ಪ್ರತಿಕೂಲಾನಿ-ಅದು ನಮ್ಮ ಆತ್ಮಕ್ಕೆ ಪ್ರತಿಕೂಲ. ಅಂದ ಮೇಲೆ, `ಪರೇಷಾಂ ನ ಸಮಾಚರೇತ್’- ನೀವೂ ಸಹ ಪರರ ಕತ್ತು ಕುಯ್ಯಲು ಹೋಗಬೇಡಿ! ಇದೇ ನಿಜವಾದ ಧಮ್ರ!!

ಯೋಚಿಸಿ ನೋಡಿ; ಇದು ಸಾವ್ರಕಾಲಿಕ. ಪ್ರತಿ ಸಂದಭ್ರ, ಪ್ರತಿ ಕೆಲಸ, ಪ್ರತಿ ನಡವಳಿಕೆಗೂ ಇದನ್ನು ಹೋಲಿಸಬಹುದು. ಇದನ್ನು ಜಗತ್ತಿನ ಎಲ್ಲರೂ ಪಾಲಿಸಿದರೆ ನಿಜವಾಧ `ಧಮ್ರ’ ತಾನೇ ತಾನಾಗಿ ನೆಲೆ ನಿಲ್ಲುತ್ತದೆ. ಈ ಮಾತಿನ ಮೂಲವು `ಅನುಕಂಬ, ಕರುಣೆ ಅಥವಾ ದಯೆ’ ಎಂಬಲ್ಲಿಗೆ ಬಂದು ನಿಲ್ಲುತ್ತದೆ; ವೇದೋಪನಿಷತ್ತುಗಳ ಈ ಮಾತನ್ನೇ ಬಸವಣ್ಣನವರು ತಮ್ಮ ಸರಳ ವಚನದಲ್ಲಿ `ದಯೆಯೇ ಧಮ್ರದ ಮೂಲವಯ್ಯಾ’ ಎಂದರು!

ಆದರೆ ಈಗ ಜಗತ್ತಿನಲ್ಲಿ ಆಗುತ್ತಿರುವುದೇನು? ಮೂಲ ವೇದೋಪನಿಷತ್ತುಗಳು ಸಾರಿರುವ ನಿತ್ಯ ಸತ್ಯಗಳನ್ನು ಧಿಕ್ಕರಿಸಿ, `ಅವು ನಮ್ಮದಲ್ಲ’ ಎಂಬಂತೆ ಕಡೆಗಣಿಸಲಾಗುತ್ತಿದೆ. ನಮ್ಮ ಅಂತರಾಳದಲ್ಲೇ ಇರುವ ದೇವರನ್ನು ಕಾಣದೆ, ಮಾಡಿದ ಪಾಪ ಕೃತ್ಯಗಳ ಭೀತಿ ಹೋಗಲಾಡಿಸಿಕೊಳ್ಳಲು ಶಾಂತಿ ನೆಮ್ಮದಿ ಅರಸುತ್ತಾ ದೇವಾಲಯಗಳ ಮುಂದೆ ಉದ್ದನೆ ಕ್ಯೂ ನಿಲ್ಲುತ್ತಿದ್ದೇವೆ! ಒಂದು ಸರಳ-ಸಾಮಾನ್ಯ ಮಾನವೀಯ ಧಮ್ರವನ್ನು ಪಾಲಿಸಲೂ ಅಶಕ್ತನಾಗಿ ಇಂದು ಮನುಷ್ಯ ಹಣ-ಅಧಿಕಾರದ ವ್ಯಾವೋಹಕ್ಕೆ ಬಿದ್ದು ಅದರ ಬಲೆಯಿಂದ ಬಿಡಿಸಿಕೊಳ್ಳಲಾಗದೆ ಚಡಪಡಿಸುತ್ತಿದ್ದಾನೆ. `ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲಾ ಅಲೆದರು’ ಎಂಬಂತೆ ಪ್ರೇತದಂತೆ ಅಲೆಯುತ್ತಿದ್ದಾನೆ. ಮಾವಿನ ಮರ ಕಡಿದು; ಬೇವಿನ ಬೀಜ ಬಿತ್ತಿ; ಮಾವಿನ ಫಲ ನಿರೀಕ್ಷಿಸುವುದಕ್ಕಿಂತ ಮೂಖ್ರತನ ಇನ್ನೊಂದಿದೆಯೇ?

ಎಚ್.ಎಸ್. ಪ್ರಭಾಕರ,

ಪತ್ರಕರ್ತ, ಎಚ್.ಆರ್.ಎಸ್. ಕಾಂಪೌಂಡ್,

6ನೇ ಕ್ರಾಸ್, ಕೆ.ಆರ್. ಪುರಂ, ಹಾಸನ.

ವೊ. 9448365816

(This post has been edited by the Administrator)

Permanent link to this article: http://www.vedasudhe.com/%e0%b2%a7%e0%b2%b0%e0%b3%8d%e0%b2%ae%e0%b2%a6-%e0%b2%a8%e0%b3%86%e0%b2%b2%e0%b3%86%e0%b2%97%e0%b2%9f%e0%b3%8d%e0%b2%9f%e0%b2%b2%e0%b3%8d%e0%b2%b2%e0%b2%bf-%e0%b2%86%e0%b2%b6%e0%b3%8d%e0%b2%b5/

Leave a Reply

 Click this button or press Ctrl+G to toggle between Kannada and English

Please complete the captcha to prove that you are a human

Your email address will not be published. Required fields are marked *


+ 5 = 9