«

»

Print this Post

ಆರ್ಯ ಸಮಾಜದಲ್ಲಿ ಉಪಾಕರ್ಮ

  ಈ ವರ್ಷದ ನನ್ನ    ಉಪಾಕರ್ಮ  ಬೆಂಗಳೂರಿನ ಆರ್ಯ ಸಮಾಜದಲ್ಲಿ ಮಾಡಿಕೊಳ್ಲಬೇಕೆಂದು ನಿರ್ಧರಿಸಿ ಅಲ್ಲಿ ಆಚರಿಸಿಕೊಂಡೆ. ಅಗ್ನಿಹೋತ್ರವನ್ನು ಈಗಾಗಲೇ ನಾನು ಮಾಡುತ್ತಿದ್ದುದರಿಂದ ನನಗೆ ಅಲ್ಲಿನ ವಿಧಿಗಳು ಆಪ್ಯಾಯಮಾನವಾಗಿ ಸಂತಸ ನೀಡಿದವು. ಉಪಾಕರ್ಮ ಸಂದರ್ಭದಲ್ಲಿ  ಉಪಾಕರ್ಮದ ಔಚಿತ್ಯವನ್ನು ಕುರಿತು ವೇದ ತರಂಗದ ಸಂಪಾದಕರಾದ ಶ್ರೀ ಶೃತಿಪ್ರಿಯರು ಮಾತನಾಡಿದರು. ಕೊನೆಯಲ್ಲಿ ವಯೋವೃದ್ಧರೂ ಜ್ಞಾನವೃದ್ಧರೂ ಆದ ಪಂಡಿತ್ ಸುಧಾಕರ ಚತುರ್ವೇದಿಯರಿಂದ ಆಶೀರ್ವಾದದದ ನುಡಿಗಳು.ಸುಮಾರು 120 ವರ್ಷದ ಪ್ರಾಯದಲ್ಲೂ  ಪಂಡಿತಜಿಯವರ ನೆನಪಿನ ಶಕ್ತಿ, ಸಮಾಜದ ಬಗ್ಗೆ ಅವರ ಕಳಕಳಿ ನಮಗೆಲ್ಲಾ ಸ್ಪೂರ್ತಿದಾಯಕವಾಗಿತ್ತು.  ವೃದ್ಧಾಪ್ಯದ ಸಹಜಕಾರಣದಿಂದ ಮಾತು ಸ್ವಲ್ಪ ಅಸ್ಪಷ್ತವಾಗಿದೆ ಎನಿಸ ಬಹುದು, ಆದರೆ ಅವರ ನೆನಪಿನ ಶಕ್ತಿ, ವಾಚಾರಿಕ ನೆಲೆ ನಮ್ಮೆಲ್ಲರಿಗೂ ಪ್ರೇರಣಾದಾಯಕವಾಗಿದೆ. ವೇದಸುಧೆಯ ಓದುಗರು  ಕೇವಲ ಹತ್ತು ನಿಮಿಷಗಳ ಎರಡು ಆಡಿಯೊ ಕ್ಲಿಪ್ ಗಳನ್ನು ಕೇಳಬೇಕೆಂದು ಕೋರುವೆ. 

Permanent link to this article: http://www.vedasudhe.com/%e0%b2%86%e0%b2%b0%e0%b3%8d%e0%b2%af-%e0%b2%b8%e0%b2%ae%e0%b2%be%e0%b2%9c%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%89%e0%b2%aa%e0%b2%be%e0%b2%95%e0%b2%b0%e0%b3%8d%e0%b2%ae/

Leave a Reply

 Click this button or press Ctrl+G to toggle between Kannada and English

Please complete the captcha to prove that you are a human

Your email address will not be published. Required fields are marked *


+ 9 = 18